ಶಿರಾಡಿ ಘಾಟಿಯಲ್ಲಿ ಚಾರಣ ಮುಗಿಸಿ ಗುಂಡ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಷಷ್ಠಿಯ ಹಿಂದಿನ ದಿನ ಬರುತ್ತಿದೆವು. ಸುಬ್ರಹ್ಮಣ್ಯಕ್ಕೆ 2 km ಇರುವಾಗ ವಾಹನ ದಟ್ಟಣೆ ಹೆಚ್ಚಾಗಿ bus ನಿಂತೇ ಹೋಯಿತು. ಎಷ್ಟು ಹೊತ್ತಾದರೂ traffic clear ಆಗದಿದ್ದಾಗ, ಈ ಸಾದಾ ರಸ್ತೆಯಲ್ಲೂ ಒಂದು ಚಾರಣವಾಗಿಬಿಡಲಿ ಎಂದು ಬಸ್ ನಿಂದ ಇಳಿದು ನಡೆಯುತ್ತಾ ಸಾಗಿದಾಗ jam ಏಕಾಗಿದೆ ಎಂದು ಸ್ಪಷ್ಟವಾಯಿತು. ಕುಮಾರಧಾರದಲ್ಲಿ ಮಿಂದ ಭಕ್ತರು ದೇವಸ್ಥಾನದ ಕಡೆಗೆ ಉರುಳು ಸೇವೆ ಮಾಡುತ್ತಿದ್ದರು. ಇದೊಂದು ವಾರ್ಷಿಕ ಕಾರ್ಯಕ್ರಮವಾದರೂ, ದೇವಸ್ಥಾನದವರಾಗಲೀ, ಪೋಲಿಸ್ ನವರಾಗಲಿ ಹೆಚ್ಚೇನು ವ್ಯವಸ್ಥೆ ಮಾಡಿಕೊಂಡಂತೆ ಕಾಣಲ್ಲಿಲ. ಇದ್ದ ಒಂದೇ ವ್ಯವಸ್ಥೆ ಎಂದರೆ, ಭಕ್ತರು ಯಾವ ಬದಿಯಲ್ಲಿ ಉರುಳು ಹಾಕುತ್ತಿದ್ದರೋ ಆ ಬದಿಯ ವಾಹನ ಸಂಚಾರವನ್ನು ನಿಲ್ಲಿಸಲಾಗುತ್ತಿತ್ತು. ಯಾರ ನಿರ್ವಹಣೆಯೂ ಇಲ್ಲದ ಕಾರಣ ಭಕ್ತರು ಎರಡು ಬದಿಯಲ್ಲೂ ಉರುಳು ಹಾಕುತ್ತಿದ್ದರಿಂದ, ಅಲ್ಲಲ್ಲಿ ಎರಡು ಬದಿಯೂ ವಾಹನವನ್ನು ನಿಲ್ಲಿಸಲಾಗಿತ್ತು. ಇದೇನಿದು, ಇವರಿಂದ ಅನ್ಯರಿಗೆಲ್ಲಾ ಎಷ್ಟೊಂದು ತೊಂದರೆ ಎಂದೊಮ್ಮೆ ಅನಿಸಿದರೂ, ನಂತರ ಇವರ ಕಷ್ಟ ಯಾರಿಗೂ ಬೇಡ ಅನಿಸಿತು.
- ನದಿಯಿಂದ ದೇವಸ್ಥಾನ ಸಾಕಷ್ಟು ದೂರದಲ್ಲಿದೆ (2 km ಇರಬಹುದು)
- ಉರುಳು ಹಾಕುವವರಿಗೆ ದಾರಿಯಲ್ಲಿ ಕಾದಿರಿಸಿದ ಜಾಗದ ವ್ಯವಸ್ಥೆ ಯಿಲ್ಲ. ಅಲ್ಲದೆ ದಾರಿಯೂ ಅಷ್ಟೇನು ವಿಸ್ತಾರವಿಲ್ಲ.
- ವಾಹನಗಳೂ ಅಲ್ಲೇ ಸಂಚರಿಸುವುದರಿಂದ, ಉರುಳುವವರ ತಲೆ ಕೈ ಕಾಲು ವಾಹನದಡಿ ಬಂದರೂ ಆಶ್ಚರ್ಯವಿಲ್ಲ.
- ಕಂಡಕಂಡಲ್ಲಿ ಉಗುಳಿರುವುದರಿಂದ, ಉರುಳು ಹಾಕುವವರು ಉಗುಳ ಮೇಲೆ ಉರುಳದೆ ವಿಧಿಯಿಲ್ಲ.
- ಉರುಳುವಾಗ ಅನೇಕರು ವಾಂತಿ ಮಾಡುತ್ತಿದ್ದರು. ಅದನ್ನು ಅಲ್ಲೇ ಸ್ವಚ್ಛ ಮಾಡುವವರಿಲ್ಲದೆ, ಭಕ್ತರಿಗೆ ಅತ್ಯಂತ ಕಷ್ಟ ಆಗುತ್ತಿತ್ತು.
ದೇವಸ್ಥಾನ ತಲುಪಿದಾಗ, ಸ್ಥಳದ greatness ಬಗ್ಗೆ ಧ್ವನಿ ವರ್ಧಕದಲ್ಲಿ ಹೀಗೆ ಪ್ರಸಾರವಾಗುತ್ತಿತ್ತು – “… ದಿನಕ್ಕೆ ಸಾವಿರಾರು ಭಕ್ತರು ಬರುತ್ತಾರೆ… ಸಚಿನ್ ತೆಂಡೂಲ್ಕರ್ ಬಂದಿದ್ದರು… ಈ ಮಂತ್ರಿ ಮಹೋದಯರೂ ಬಂದಿದ್ದರು….”. ಇಷ್ಟೆಲ್ಲಾ ದೊಡ್ಡ ದೇವಸ್ಥಾನದಲ್ಲಿ, ಉರುಳು ಸೇವೆ ಮಾಡುವ ಭಕ್ತರಿಗೆ, ಇಷ್ಟೊಂದು ಕನಿಷ್ಠ ವ್ಯವಸ್ಥೆ ಯೇ ಎಂದು ಆಶ್ಚರ್ಯ ಆಗದೆ ಇರಲ್ಲಿಲ್ಲ. ಸಾಮಾನ್ಯವಾಗಿ ಜೀವನದಲ್ಲಿ ತೊಂದರೆಗಳಿರುವವರು ಉರುಳು ಸೇವೆ ಮಾಡುತ್ತಾರೆ, ಅಷ್ಟು ಕಷ್ಟ ಸಹಿಸಿದವರಿಗೆ ಇದೇನು ಮಹಾ ಕಷ್ಟ ಏಂಬ ಧೋರಣೆಯೇ ?