ಪುರಂದರ ವಿಢಲ!

ಮೊನ್ನೆ ಅಮೃತವರ್ಷಿಣಿ (FM 100.1) channel ನಲ್ಲಿ ತಮಿಳು ಮೂಲದವರೊಬ್ಬರ ಕರ್ನಾಟಕ ಶಾಸ್ತ್ರೀಯ ಗಾಯನ ಪ್ರಸಾರವಾಗುತಿತ್ತು. ಇನ್ನೇನು channel ಬದಲಿಸಬೇಕೆನ್ನುವಷ್ಟರಲ್ಲಿ ದಾಸರ ಪದವೊಂದು ಶುರುವಾಯಿತು. ಸರಿ ಇದೊಂದನ್ನು ಕೇಳಿ ಬಿಡೋಣ ಎಂದು ಕೇಳುತ್ತಾ ಹೋದೆ. “ವೇಂಕಟಾಚಲ ನಿಲಯಂ ವೈಕುಂಠ ಪುರವಾಸಂ” ಎಂದು ಪ್ರಾರಂಭವಾಗುವ ಕೀರ್ತನೆಯದು. ಬಹುತೇಕ ತಮಿಳರ ಕನ್ನಡ/ಸಂಸ್ಕೃತ ಶಾಸ್ತ್ರೀಯ ಗಾಯನದಲ್ಲಿ ಅನೇಕ ತಪ್ಪುಗಳಿರುತ್ತವೆ ಎಂದು ಅನ್ಯರು ಹೇಳಿದ್ದು ಕೇಳಿದ್ದೆ, ಅದರ ಅನುಭವ ಈಗ ಆಗತೊಡಗಿತು. “ವೈಕುಂಡ ಪುರವಾಸಂ” ಎಂದು ಶುರುವಾದ ಪದ್ಯ “ಪುರಂದರ ವಿಢಲ” ಎಂದು ಕೊನೆಗೊಂಡಾಗ ಶಾಸ್ತ್ರೀಯ ಸಂಗೀತವನ್ನು ಹೀಗೂ ಹಾಡುತ್ತಾರಾ/ಹಾಡಬಹುದ ಎಂದು ಆಶ್ಚರ್ಯ ಹಾಗೊ ಸ್ವಲ್ಪ ಬೇಸರವೂ ಆಯಿತು.

ಜೊತೆಗೆ ದಾಸರ ಮತ್ತೊಂದು ಪದದ ನೆನಪಾಯಿತು – “ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ”. ಇದನ್ನು ಮೇಲೆ ತಿಳಿಸಿದ ಮಹನೀಯರು ಹಾಡಿದರೆ ಹೇಗಿರಬಹುದು ಎಂದು ಯೋಚಿಸಿದಾಗ ನಗು ಬಂತು – “ದಾರಿ ಯಾವುದಯ್ಯ ವೈಕುಂಡಕೆ ದಾರಿ ತೋರಿಸಯ್ಯ” ಎಂದು ದಾರಿ ಕೇಳಿದವನ ಪಾಡು ಏನೆಂದು! ದಾಸರ ಈ ಜಟಿಲ ಪ್ರಶ್ನೆಗೆ ಉತ್ತರ ದೊರೆಯಲು ಅನೇಕ ಜನ್ಮಗಳು ಬೇಕಗಿರುವಾಗ, ಹೀಗೆ ಪ್ರಶ್ನೆಯನ್ನೇ ಸರಿ ಕೇಳದಿದ್ದರೆ ಏನು ಅವಸ್ಥೆ ಎಂದು!

Leave a comment